ನಗರದ ತಾಲೂಕು ದಂಡಾಧಿಕಾರಿ ಕಚೇರಿಯ ಮುಂಭಾಗ ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟ, ಅಖಿಲ ಭಾರತ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ, ಮತ್ತು ವಿಜಯನಗರ ಜಿಲ್ಲಾ ಜಂಟಿ ಸಮಿತಿಯ ವತಿಯಿಂದ ರಾಜ್ಯ ಸರ್ಕಾರಿ ಪಿಂಚಣಿದಾರರ ಮತ್ತು ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಹೊಸಪೇಟೆ: ಹಲವಾರು ವರ್ಷಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಾಜ್ಯ ಸರ್ಕಾರಿ ಪಿಂಚಣಿದಾರರು ಮತ್ತು ನೌಕರರ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ ತಾಲೂಕು ದಂಡಾಧಿಕಾರಿಗಳ ಮುಖಾಂತರ ತಮ್ಮ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಿಂಚಣಿದಾರರ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷರಾದ ಬಿಸಟಿ ತಾಯಪ್ಪನಾಯಕ ರವರು ನೇತೃತ್ವದಲ್ಲಿ ಸರ್ವ ಸದಸ್ಯರು ಸೇರಿ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿದವರು : ಮರಡಿ ಜಂಬಯ್ಯ ನಾಯಕ, ನಾಗರಾಜ್ ಪತ್ತಾರ, ಎಂ ಧನರಾಜ್, ಕಂಪ್ಲಿ ಚಂದ್ರಪ್ಪ, ಸುನಿತಾ ಅನ್ವೇಕರ್, ಹನುಮಂತಪ್ಪ ಗೌಳಿ, ಕೆ ಲಿಂಗಪ್ಪ,
ಟಿ ಲತಾ, ರಂಗನಾಥ ಹವಲ್ದಾರ್, ನಾಗೇಶ್, ಎಂ ಧರ್ಮನಗೌಡ, ಅನುಪಮ, ಕೆ ತಾಸೇನ್, ಅಂಬುಜ, ಉಷಾರಾಣಿ, ಅಜಿತ್ ಮದಕರಿ, ಜಿ ಮಾರುತಿ, ಸರ್ವ ಸದಸ್ಯರು ಭಾಗವಹಿಸಿದರು.
ವರದಿ :-ಮೊಹಮ್ಮದ್ ಗೌಸ್
