Tuesday, March 24, 2026
Homeವಿಜಯನಗರ ಜಿಲ್ಲೆಸಾಬರಿಗೆ ಉರುಸು ಗೆ ಕರೆದುಕೊಂಡು ಹೋಗಲಿ‌ :ಶಾಸಕ ಅರವಿಂದ್ ಬೆಲ್ಲದ್

ಸಾಬರಿಗೆ ಉರುಸು ಗೆ ಕರೆದುಕೊಂಡು ಹೋಗಲಿ‌ :ಶಾಸಕ ಅರವಿಂದ್ ಬೆಲ್ಲದ್

ವಿಜಯನಗರ : ಜಾಗೃತಿ ಬೆಳಕು (ಬ್ರೇಕಿಂಗ್)

ಹೊಸಪೇಟೆಯಲ್ಲಿ‌ ಶಾಸಕ ಅರವಿಂದ್ ಬೆಲ್ಲದ್ ಹೇಳಿಕೆ..ಬಾನು ಮುಸ್ತಾಕ್ ದಸರಾ ಉದ್ಘಾಟನೆ ವಿಚಾರ..*ದಸರಾ ಉದ್ಘಾಟನೆಗೆ ಸಾಬರ್ ಬಿಟ್ಟು ಬೇರೆಯಾರು ಸಿಗೋದಿಲ್ವಾ..

*ಸಾಬರ್ ಉರುಸು ಗೆ ಕರೆದುಕೊಂಡು ಹೋಗಲಿ‌ ಅವರನ್ನ..ದಸರಾಕೆ ಯಾಕೆ ಕರೆದುಕೊಂಡು ಹೋಗಬೇಕು..ಹಿಂದೂ ಭಾವನೆಗಳಿಗೆ ನಾವೇನು ಲಕ್ಷ ಕೊಡುವುದಿಲ್ಲ..ನಾವು ಕೇವಲ ಮುಸ್ಲಿಂರಿಗೆ ಮಾತ್ರ ಸ್ಪಂದನೆ ಮಾಡ್ತೀವಿ..

ಹಿಂದೂಗಳಿಗೆ ಸ್ಪಂದನೆ ಮಾಡ್ತೀವಿ ಅಂತಾ ಹೇಳೋದಿಕ್ಕೆ ಸಿದ್ದರಾಮಯ್ಯ ಇದನ್ನ ಮಾಡಿದ್ದಾರೆ..ಹಿಂದೂಗಳ ಭಾವನೆ ಕದಡುವ ಕೆಲಸ ಸಿಎಂ ಯಾಕೆ ಮಾಡಬೇಕು..ಜಾತ್ಯಾತೀತ ರಾಷ್ಟ್ರ ಇದ್ರ ಹಿಂದೂ ಪೂಜೆಗೆ ಮುಸ್ಲಿಂರು ಯಾಕೆ ಕರೆತರಬೇಕು ಅಂತಾ ಸಿಎಂ ವಿರುದ್ಧ ಅರವಿಂದ್ ಬೆಲ್ಲದ್ ವಾಗ್ದಾಳಿ..ಬಾನು ಮುಸ್ತಾಕ್ ಅವ್ರು ಮುಸ್ಲಿಂ ಧರ್ಮದವ್ರು..ಮುಸ್ಲಿಂ ಧರ್ಮದವರಿಗೆ ಹಿಂದೂ ಪದ್ಧತಿಯಲ್ಲಿ ಬಗ್ಗೆ ನಂಬಿಕೆ ಇರುವುದಿಲ್ಲ..ದಸರಾ ಉದ್ಘಾಟನೆಗೆ ಚಾಮುಂಡೇಶ್ವರಿಗೆ ಪೂಜೆ ಮಾಡಬೇಕು..

ಅದನ್ನ ಬಾನು ಮುಸ್ತಾಕ್ ಅವ್ರು ಮಾಡ್ತಾರೇನು..ಹಿಂದೂ ಧರ್ಮದ ಪದ್ಧತಿ, ಹಿಂದೂ ಧರ್ಮದ ಸಂಸ್ಕೃತಿ ಒಪ್ಪಿಕೊಂಡು ಮಾಡ್ತೀನಿ ಅಂತಾ ಬಾನು ಮುಸ್ತಾಕ್ ಅವ್ರು ಹೇಳಲಿ..

*ತುಂಗಭದ್ರಾ ಜಲಾಶಯ ಗೇಟ್ ಕಿತ್ತೋಗಿರೋ ವಿಚಾರ..*ಹೊಸಪೇಟೆಯಲ್ಲಿ ಶಾಸಕ ಅರವಿಂದ್ ಬೆಲ್ಲದ ಸ್ಪೋಟಕ ಹೇಳಿಕೆ..2023ರಲ್ಲಿ ತುಂಗಭದ್ರಾ ಜಲಾಶಯದ ಗೇಟ್ ಗಳು ಡ್ಯಾಮೇಜ್ ಆಗಿದ್ದು ಗೊತ್ತಾಗಿತ್ತು..ರಿಪೇರಿ ಮಾಡಲಿಕ್ಕೆ ಆಗ ಟೆಂಡರ್ ಕರೆಯಲಾಗಿತ್ತು..ಆ ಟೆಂಡರ್ ಕರೆದಾಗ ಬೋರ್ಡ್ ಅಧಿಕಾರಿಗಳು..ರಾಘವ್ ಕನ್ಸಟ್ರಕ್ಷನ್ ಎನ್ನುವ ಕಂಪನಿಗೆ ಟೆಂಡರ್ ಕೊಟ್ರು..ಇನ್ನುಳಿದ ಟೆಂಡರ್‌ ಹಾಕಿದ ಕಂಪನಿಗಳನ್ನ ಡಿಸಕ್ವಾಲಿಪೈ ಮಾಡೋ ಕೆಲಸ ಮಾಡಿದ್ರು..ರಾಘವ್ ಕನ್ಸಟ್ರಕ್ಷನ್ ಕಂಪನಿಗೆ ಕ್ವಾಲಿಫಿಕೇಶನ್ ಇರದಿದ್ರು ಸಹ ಅವರಿಗೆ ಎಸ್ ಆರ್ ರೇಟ್ ಗಿಂತ ಅಡಿಶನಲ್ 4.9% ರೇಟ್ ಹೆಚ್ಚು ಮಾಡಿ ರಾಘವ್ ಕನ್ಸಟ್ರಕ್ಷನ್ ಗೆ ಕೆಲಸಕೊಟ್ರು..ಆವಾಗ ಕೆಲವು ಜನ ಹೈಕೋರ್ಟ್ ಗೆ ಹೋದ್ರು..ಹೈಕೋರ್ಟ್ ತುಂಗಭದ್ರಾ ಪ್ರಾಧಿಕಾರದ ನಿರ್ಧಾರದ ವಿರುದ್ಧ ಆದೇಶ ಕೊಟ್ತು..

ಆದಾದ ಬಳಿಕ ಕೇಂದ್ರದ ಜಲಶಕ್ತಿ ಮಂತ್ರಾಲಯ ತನಿಖೆ ನಡೆಸಲು ಕೊಟ್ತು..ಸೌಥ್ ಡಿವಿಶನ್ ಮೈನಿಂಗ್ ಡಿಪಾರ್ಟ್ ಮೆಂಟ್ ಪ್ರಮುಖರ ನೇಮಿಸಿ ಟೆಂಡರ್ ನೀಡಿರುವ ಬಗ್ಗೆ ತನಿಖೆ ನೇಮಕ ಮಾಡಿದ್ರು..ಒಟ್ಟು ವಿಷಯದಲ್ಲಿ ರಾಘವ್ ಕನ್ಸಟ್ರಕ್ಷನ್ ಗೆ ಕೊಟ್ಟಿರೋದು ತಪ್ಪು ಎನ್ನುವ ವಿಷಯ ಹೊರಗೆ ಬಂತು..ಆ ಸಂದರ್ಭದಲ್ಲಿ ಸರಿಯಾದ ಕಂಪನಿಗೆ ಕೆಲಸ ಕೊಟ್ಟಿದ್ರೆ..ಇದರಲ್ಲಿ‌ ಭ್ರಷ್ಟಾಚಾರ ಅವ್ಯವಹಾರ ನಡೆಯದಿದ್ದರೆ ಇವತ್ತು ಜಲಾಶಯಕ್ಕೆ ಈ ಪರಿಸ್ಥಿತಿ‌ ಬರ್ತಿರಲಿಲ್ಲ..

ಜಲಾಶಯದ ಈ ಪರಿಸ್ಥಿತಿಗೆ ಬರಲು ಪ್ರಮುಖ ಕಾರಣ ತುಂಗಭದ್ರಾ ಮಂಡಳಿ ತೆಗೆದುಕೊಂಡಿರೋ‌ ನಿರ್ಧಾರವೇ ಕಾರಣ..*ಕಳೆದ ವರ್ಷ ನಡೆದ ಅವಾಂತರಕ್ಕೆ ಟಿಬಿ ಬೋರ್ಡ್ ನ ನಿರ್ಧಾರವೇ ಕಾರಣ*ಅದೃಷ್ಟ ವಶಾತ್ ಕಳೆದ ವರ್ಷ ನಡೆದ ಅವಾಂತರದಲ್ಲಿ ಡ್ಯಾಂ ಕುಸಿದು ಬೀಳಲಿಲ್ಲ..ಡ್ಯಾಂ ಘಡಘಡ ನಡುಗಿತ್ತು, ಇಡೀ ರಾಜ್ಯವೇ ಚಿಂತೇಗೀ

ಡಾಗಿತ್ತು..ಈ ಭ್ರಷ್ಟಾಚಾರ ಏನಾಗಿದೆ ಇದರ ಬಗ್ಗೆ ತನಿಖೆ ಮಾಡಬೇಕು ಅಂತಾ ಸದನದಲ್ಲಿಯೇ ಆಗ್ರಹ‌ ಮಾಡಿದ್ದೇ..ಇದುವರೆಗೂ ಯಾವುದೇ ತನಿಖೆ ನಡೆದಿಲ್ಲ..ಸರ್ಕಾರ ಕೂಡಲೇ ಇದರ ಬಗ್ಗೆ ತನಿಖೆ ನಡೆಸಬೇಕು ಅಂತಾ ಅರವಿಂದ್ ಬೆಲ್ಲದ್ ಆಗ್ರಹ..ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಆಗಬೇಕು ಅಂತಾ ಆಗ್ರಹ..

33 ಗೇಟ್ ಗಳಲ್ಲಿ ಒಂದು ಗೇಟ್‌ ನಿರ್ಧಾರ ತೆಗೆದುಕೊಂಡಿದ್ದಾರೆ.ಈಗ 7 ಗೇಟ್ ಗಳು ಜಾಮ್ ಆಗಿದ್ದಾವೆ..ಅಕ್ಟೋಬರ್, ನವೆಂಬರ್ ಆದ್ಮೇಲೆ ಕೆಲಸ ಶುರುಮಾಡ್ತೀವಿ ಅಂತಿದ್ದಾರೆ..ಮುಂದಿನ‌ ಮಳೆಗಾಲದ ಒಳಗೆ ಮುಗಿಸ್ತೀವಿ ಅಂತಾ ಹೇಳಿದ್ದಾರೆ..ಇಲ್ಲಿ ನಾಲ್ಕು ಜನ ಕೆಲಸ ಮಾಡ್ತಿದ್ದಾರೆ..

ಈ ವರ್ಕ್ ಸ್ಪೀಡ್ ನೋಡಿದ್ರೆ ಗೇಟ್ ಗಳನ್ನ ಯಾವಾಗ ತಯಾರಿ ಮಾಡ್ತಾರೆ..ಸರ್ಕಾರದ ಈ ಕೆಲಸದ ಬಗ್ಗೆ ಸಂಶಯ ಇದೆ..

ವರದಿ :ಮಹಮ್ಮದ್ ಗೌಸ್

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

Latest news